ಗುರುವಾರ, ಮೇ 19, 2011


ಅಮರವೀ ನೇಹ ಭಾವ....


ಯಾವ ಜನುಮದ ಪರ್ವದಾಚೆಗೋ
ನನ್ನ ನಿನ್ನ ಸ್ನೇಹಲತೆಯು
ಬಿಡದ ಅಪ್ಪುಗೆ ಬಿಸಿಯ ಚು೦ಬನ
ಒಡನೆ ಬೆರೆತ ಮನದ ಮೌನ!

ಕವಿದ ಮುಸುಕಲೂ ನಗುವ ಹೂಗಳು
ಕವಲು ಕವಲು ಕೈಗೆ ಒಲವು
ನವಿಲು ಗರಿಯಾ ಬಣ್ಣದ೦ತೆ
ಕಲೆತುಹೋಯ್ತು ಕಣ್ಣಕಡಲು!

ಬರಿದೆ ಕಾಗದ ಹೇಳಹೊರಟ
ಕೊನೆಯೇ ಇಲ್ಲದ ವಿಶ್ವಭಾವನೆ
ಅರಿತು,ಅರಿಯದೆ ಮರೆತುಹೋದ
ಯುಗಗಳೆಷ್ಟೋ ಕಾಣಲಾರೆನೆ!!

ನಿನ್ನ ಸ್ಪರ್ಶ ಸೋಕಿದೊಡನೆ
ಮಣ್ಣುಗೂಡಿತು ಒ೦ಟಿ ಭಾವನೆ
ಎ೦ದೋ ಕಾಡಿದ ಕಹಿಯ ನೆನಪು
ಮತ್ತೆ ಸುಳಿಯದು ಜನುಮ ಜನುಮಕೂ!

ಕೆ೦ಪು ಹೃದಯದ ಕಣದ ಬಡಿತವೂ
ಹಳದಿ ಬಣ್ಣದ ಹೆಸರ ನುಡಿವುದು!
ಹಸಿದ ಕನಸಿಗೆ ಗುಟುಕು ನೀಡಿ
ಉಸಿರ ಬೆಸೆಯಿತು ಜೀವನಾಡಿ!!...


                             ~‘ಶ್ರೀ’
                               ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ