ಗುರುವಾರ, ಮೇ 12, 2011


ಹೊಸತನ...ಅನುದಿನ....


ಬ್ರಹ್ಮ ಹೆಣೆದ ಮಧುರ ಬ೦ಧ
ಮನಸುಗಳ ಮಾತಿನ೦ದ
ಹೃದಯ ಶರಧಿಯ ಮೌನ ಮುರಿದು
ಕಲಕಲನೆ ನಗುತ ಕುಣಿವ ಪರಿಯು

ಅಧರದಲ್ಲಿ ಮಧುರತರದಿ
ಜೀವಭಾವ ಹೊಮ್ಮಿ ಪ್ರತಿಕ್ಷಣ
ಮುನಿದು ಮರುಗಿದ
ಹೃದಯದಲ್ಲಿ ಅರಳಿತೀಗ ನವಚೇತನ!

ಆರಹೋದ ಪ್ರೀತಿ ದೀಪ
ಕತ್ತಲೆಯ ಹೊರಗಟ್ಟುತಿಹುದು!
ನರ್ತಿಸಿಹ ನೋವಿನಲೆಗಳು
ಮತ್ತೆ ಮೌನವಹಿಸುತಿಹವು!!

ಸ್ಪರ್ಶ ಮರೆತ ಮನಸಿನುಸಿರು
ಎದೆಯ ಗೂಡನು ತಟ್ಟುತಿಹುದು!
ಇ೦ಗಿಹೋದ ಕ೦ಗಳಲ್ಲಿ
ಕನಸಿನ ಕ೦ಬನಿ ಉಕ್ಕುತಿಹುದು!!

ಸಾವಿನಲ್ಲಿ ಬೆರೆಯಹೋದ
ಹೃದಯ ಅಮರವಾಗುತಿಹುದು
ಕಾಲನಲ್ಲಿ ಹುದುಗಿಹೋದ
ಬದುಕು ಮರಳಿ ಕರೆಯುತಿಹುದು!!



                        ~‘ಶ್ರೀ’
                          ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ