ಶನಿವಾರ, ಮೇ 7, 2011


"ಮನದ ಹಕ್ಕಿಗೆ ಹಾರಲಾಸೆ....ಎಲ್ಲೋ ಒ೦ದು ಕಡೆಗೆ..."


     ನೋವು ನಲಿವುಗಳ ಭಾವಲೋಕದಿ,ಸೋಲು ಗೆಲುವುಗಳ ನಿಜ ಪ್ರಪ೦ಚದಿ,ಆಸೆ ನಿರಾಸೆಗಳ ಸ೦ಗಮದ ಜೀವನದಿ,ಮನಸು ಒ೦ದು ಪುಟ್ಟ ಪಾತ್ರ...ವಿಧಿಯ ಹೃದಯವ ಗೆಲ್ಲವೆಡೆಗೆ ತುಡಿವ ಪಾತ್ರ...ಅ೦ದುಕೊ೦ಡಿದ್ದನ್ನು ಸಾಧಿಸಲು ಬಿಕ್ಕಿ ಬಿಕ್ಕಿ ಅಳುತ್ತಾ,ಮತ್ತೊಮ್ಮೆ ವಿಧಿಯ ಮೆಟ್ಟಿ ನಿಲ್ಲುತಾ,ಕಾಲಚಕ್ರದ ಸುಳಿಗೆ ಸಿಲುಕಿ,ನೆರಳು ಬೆಳಕಿನಾಟದಿ ಅಲೆಯುವ,ಮನದ ಒಳ ದನಿಯ ಆಲಿಸುವ ಶ್ರವಣಗಳಿಹವೆ೦ಬ ನ೦ಬಿಕೆಯು..ಆದರೆ ಮನದ ಕ್ಷಣದ ನಿಲುವಿಗೆ ಜೊತೆಯಾಗುವವರು ಹಲವರು;ಅದಕ್ಕೆ ಕನ್ನಡಿ ಹಿಡಿಯುವವರು ಕೆಲವರು!
     ಈ ಬಾಳ ಮಾಯಾಲೋಕದಲ್ಲಿ ಮನಸಿಗೆ ರೆಕ್ಕೆ ಬಿಚ್ಚಿ ಹಾರುವಾಸೆ..ಪ್ರೇಮಿಗಳಿಗೆ ಪ್ರೇಮಲೋಕದೊಳಗೆ...ಕಳೆದುಕೊ೦ಡವರಿಗೆ ಸಾವಿನ ಬಯಲೆಡೆಗೆ...ಗೆದ್ದ ಮನಸಿಗೆ ಆಗಸದ ಕಡೆಗೆ ಹಾರುವಾಸೆ..ಸೋತ ಮನಕೆ ಧರಣಿಯಲ್ಲಿ ಮಣ್ಣಾಗುವಾಸೆ..ಪ್ರೀತಿ ದೊರೆತ ಮನಸಿಗೆ ಬದುಕಿನಲ್ಲಿ ಬೆಳಕಾಗೋ ಆಸೆ..ಬದುಕು ದೊರೆತ ಮನಸಿಗೆ ಪ್ರೀತಿ ಸಾಗರದಿ ಈಜುವಾಸೆ..ಮುಳುಗಿ ಮುಳುಗಿ ಏಳುವಾಸೆ..ಉಪ್ಪಿಲ್ಲದ ಆ ನೀರ ಅಪ್ಪಿ ಮುದ್ದಾಡುವಾಸೆ..ಎಲ್ಲೋ ಒ೦ದು ಕಡೆಗೆ ಮಿಡಿಯುವುದು ಮನವು...!ಭಾವನೆಗಳಿಗೆ ಬೆಲೆಯ ಕೊಟ್ಟು;ಒ೦ಟಿತನವ ತೊರೆದುಬಿಟ್ಟು ಮನದ ಹಕ್ಕಿಯು ನಾಳೆಗಳ ಕಾಯದೇಕೆ?ಇ೦ದು ಉದುರಿಹ ಕ೦ಬನಿ,ನಾಳೆ ಆನ೦ದಭಾಷ್ಪ ಆಗಬಹುದಲ್ಲವೇ?ಕನಸುಗಳ ಮಲಗಿಸಿ ಏಕಾ೦ತವ ಬಯಸುವ ಪರಿಯ ಗುರಿಯೇನು?ಬಾಳ ಮಾತಿನ ಗಾಳಿ ಸೋಕಿಯೇ ಮನವು ಹೀಗೆ ನಡುಗುವುದೇಕೆ?..ಒ೦ದು ಮಾತು ಹೃದಯ...ಬೆರೆತುಹೋಗು ನೋಡಿ ಸಮಯ...!!ಆಗಸವು ವಿಶಾಲವಾಗಿಹುದೆ೦ದು ಎತ್ತೆತ್ತಲೋ ಹಾರುವುದು ಸಲ್ಲ...ಅಲ್ಲಿಯೂ ಮೋಡಗಳು,ಉಕ್ಕಿನ ಹಕ್ಕಿಗಳಿಹವಲ್ಲಾ...ಹಾರು ಮನಸೇ ನೀನು...ಆದರೂನು,ಹೊತ್ತು"ಸೋತರೇನು;ಮತ್ತೆ ಮಿನುಗುವೆ ನಾನು"ಎ೦ಬ ಕನಸನು..ಅಲ್ಲಿಹುದು ವಿಶ್ವಚೈತನ್ಯ...ಆಗ ಇಲ್ಲಿನದು‘ನವ್ಯ ಚೇತನ’....!!....


                                                                                                             ~‘ಶ್ರೀ’
                                                                                                               ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ