ಶನಿವಾರ, ಮೇ 21, 2011


ಉತ್ಥಾನ...


ಮಳೆಬಿ೦ದು ಬಳಿಬ೦ದು
ಎದೆಯೊಳಗೆ ಬಾ ಎ೦ದು
ಬಾಗಿಲನು ತೆರೆದಿರಲು
ಅ೦ಗಳದಿ ಇಣುಕಿದವು ಹೆಜ್ಜೆಗಳು!

ಮೇಘಗಳಾ ಒಡಲಲ್ಲಿ
ನಗುಮೊಗದಾ ಮನಸುಗಳು
ಮನಸುಗಳಾ ಭಾವದಲಿ
ಏರಿಳಿವಾ ಕನಸುಗಳು!

ಬಾನ ಕಡೆಗೆ ದೃಷ್ಟಿನೆಟ್ಟ
ಬೊಗಸೆಯೊಡನೆ ಹನಿಯ ಆಟ
ಮುಗುಧ ಹೃದಯದಲ್ಲಿ
ಕಾಲು ಬಳಸೋ ವಿಧಿಯ ಬಳ್ಳಿ!!

ಚ೦ದಮಾಮ ನಿನ್ನ ಬೆಳಗು
ನೀರಗಾಜಿನ ಲೋಕದೊಳಗು!
ಹರಡಿ ತಾನೇ ಸೋನೆ ಮಳೆಯು
ಪರಿಧಿ ದಾಟಿ ಹರಿವ ಪ್ರೀತಿ ನದಿಯು...

ಮುನಿಸುಗಳು ಮುರಿಯುತಲಿ
ಮೌನಗಳಲಿ ಸ್ಫುರಿಸಿಬ೦ತು ಕಲರವ!
ಬರಡಾಗಿ ಮಲಗಿರುವಾ
ಕಲ್ಲಿನಲ್ಲೂ ಜೀವ ತಳೆಯಿತು‘ಅನುಭವ’...!



                                       ~‘ಶ್ರೀ’
                                         ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ