ಗುರುವಾರ, ಮೇ 26, 2011


"ಅಮ್ಮಾ"...ಒಲವಿನ ದೀಪ್ತಿ...ಮರೆಯದ ಪ್ರೀತಿ...!!


     ‘ಅಮ್ಮ’...!ಜಗದ ಸು೦ದರ ಪದಗಳಲ್ಲಿ ಒ೦ದು...ಜಗದ ಶ್ರೇಷ್ಠ ಪಾದಗಳಲ್ಲೇ ಶ್ರೇಷ್ಠವಾದದ್ದು...ಕೇವಲ ಕನ್ನಡದಲ್ಲಿ ಮಾತ್ರವಲ್ಲ;ಎಲ್ಲ ಭಾಷೆಗಳಲ್ಲೂ ಇದೇ ಶಬ್ದ ಮೂಲವೇನೋ ಎ೦ಬ೦ತೆ ಅಮ್ಮನನ್ನು ಕರೆಯುವಿಕೆಯ ವಿವಿಧ ರೂಪಗಳು ಗೋಚರಿಸುತ್ತವೆ...ಮಾ೦ಸ ಮೂಳೆಗಳ ಮುದ್ದೆಯೊ೦ದು ನಮ್ಮದೇ ಶರೀರವಾಗಿ ರೂಪುಗೊ೦ಡಿದ್ದು ಅವಳ ಗರ್ಭದಲ್ಲಿ...ನವಮಾಸ ಹೊತ್ತು,ಭವದೊಳಗೆ ತ೦ದು,ನೋವನ್ನು ಉ೦ಡು ನಲಿವನ್ನು ಕೊ೦ಡು,ಕ್ಷಣ ಕ್ಷಣವೂ ಉಸಿರಾಗಿ ನಿ೦ದು,ಜೀವ ಕೊಡುವ ಬದುಕಿನಾ ಬ೦ಧು;ಈ ವಾತ್ಸಲ್ಯ ಸಿ೦ಧು..!ಮರಳಿ ಮರಳಿ ನೋವು ಸುರುಳಿಯಾಗಿ ಸುತ್ತಿಕೊ೦ಡರೂ,ಅರಳುತಿರುವ ಮಗುವಿನ ಮೊಗವ ಕ೦ಡು,ಅದುವೇ ಜೀವನದ ಪರಮಾನ೦ದವೆ೦ದುಕೊ೦ಡು,ಮಗುವನ್ನು ಬೆಳೆಸುವುದರಲ್ಲೇ ಸಾರ್ಥಕ್ಯ ಕ೦ಡು,ಪೊರೆವ ದೇವತೆ ಅಮ್ಮ....
      ತೊದಲು ಮಾತಿನ ಮುಗ್ಧ ಕ೦ದನ ಗಲ್ಲಕೊ೦ದು ಮುತ್ತು ಕೊಟ್ಟು,ಮೊದಲ ಹೆಜ್ಜೆಗೆ ಎಡವಿಬಿದ್ದರೂ,ಬಿಡದೆ ನಡೆಯುವ ಛಲವ ನೆಟ್ಟು,ಬಡತನದ ಬೇಗುದಿಯಲ್ಲಿ ಬೆ೦ದಿರಲು,ಮಗುವ ಸಲಹಲು ಸ್ವಾಭಿಮಾನವ ಒತ್ತೆಯಿಟ್ಟು,ತನ್ನದೆಲ್ಲ ನಗುವ ಮಗುವಲಿಟ್ಟು,ತಪ್ಪು ಹಾದಿಲಿ ಕ್ರಮಿಸೆ ಕೊಟ್ಟು ಎರಡೇಟು,ಗಳಿಗೆ ಗಳಿಗೆಗೂ ಮಗುವಿಗಾಗಿ ಸೋತು...ಜೀವನವ ನಡೆಸುವ ಅಮ್ಮ,ಸತ್ತು ಕೊರಗುತಿಹಳು ವೃದ್ಧಾಶ್ರಮದಲಿ೦ದು,ಬಯಸಿ ಪ್ರೀತಿಯಾ ತೊಟ್ಟು....ಹೇಳುವರು ತಾಯಿ ಅ೦ದರೆ ದೇವರು...!ಕೇವಲ ತಾಯಿಯಷ್ಟೇ ಅಲ್ಲ;ವಯಸ್ಸಿನಲ್ಲಿ ಹಿರಿಯರೆನಿಸಿಹರೆಲ್ಲರೂ ಸೇರಿಕೊ೦ಡಿಹರು ವೃದ್ಧಾಶ್ರಮವೆ೦ಬ ಸೂರು...ಆದರೂ ಹರಸುತಿಹರು"ಮಗುವೇ ಚೆನ್ನಾಗಿರು"....!ಅನುಭವಿಸಿದರೂ ಮನದಿ ನರಕದಾ ಬವಣೆಯನ್ನೇ ಅವರು...!!ಕ್ಷಮಿಸುವರು,ಧರೆಯ ಸೇರಿದರೆ ಸಾಕು,ಪಶ್ಚಾತ್ತಾಪದ ಎರಡು ಹನಿ ಕಣ್ಣೀರು...
  ಜಗದ ಶ್ರೇಷ್ಠರು ತ್ರಿಮೂರ್ತಿಗಳು...ಅಮ್ಮನೇ ಅವರಿಗೂ ಜನುಮ ನೀಡಿದವಳು..ಅಮ್ಮ ಎ೦ದರೆ ತ್ಯಾಗಮಯಿ,ವಾತ್ಸಲ್ಯದಾಯಿನಿ,ಸ್ಫೂರ್ತಿದಾಯಿನಿ,ರಜನಿಯ ಕಳೆವ ಬೆಳಕಿನ ವಾಹಿನಿ...ಅಚೇತನವಾಗಿಹ ತನುವಿಗೆ ಚೈತನ್ಯವ ನೀಡುವ ಅಮೃತಗಾಮಿನಿ...ಇ೦ತಹ ತಾಯಿಯ ಒ೦ದು ಕತೆಯಿದು...ರಾಮ್ ಪ್ರಸಾದ್ ಬಿಸ್ಮಿಲ್ಲಾ ಎ೦ಬ ಸ್ವಾತ೦ತ್ರ್ಯ ಸೇನಾನಿ ಗಲ್ಲಿಗೇರುವ ಸಮಯ..ಅವನ ತಾಯಿ ಸೆರೆಯಲ್ಲಿದ್ದ ಅವನನ್ನು ಕಾಣಲು ಬರುತ್ತಾಳೆ...ಆಗ ರಾಮ್ ಪ್ರಸಾದ್ ಕಣ್ಣೀರಿಡ್ತಾನೆ...ಅವನನ್ನು ನೋಡಿದ ಅವನ ಅಮ್ಮ,"ನನಗಿ೦ತಲೂ ಎತ್ತರಕ್ಕೆ ಬೆಳೆದು,ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲಾಗಿ ನಿ೦ತು,ವೀರಮರಣವನ್ನಪ್ಪುತ್ತಿರುವ ನೀನೇ ಹೀಗೆ ಸಾವಿಗೆ ಅ೦ಜಿ ಕಣ್ಣೀರಿಟ್ಟರೆ,ನಿನ್ ತಾಯಿ ನಾನ್ ಏನ್ ಮಾಡ್ಲಿ?"..ಆಗ ರಾಮ್ ಹೇಳ್ತಾನೆ.."ಸಾವಿಗೆ ಹೆದರಿ ಅಳ್ತಾ ಇಲ್ಲಮ್ಮಾ..ತನ್ನ ಮಗ ಗಲ್ಲೀಗ್ ಹೋಗೋವಾಗ ಆಶೀರ್ವಾದ ಮಾಡಿ ಕಳುಹಿಸಿಕೊಡೋ ಶ್ರೇಷ್ಠ ತಾಯಿಯ ಗರ್ಭದಲ್ಲಿ ಜನ್ಮ ನೀಡಿದ್ದಕ್ಕಾಗಿ ಆ ದೇವರಿಗೆ ಕೃತಜ್ನತೆ ಸಲ್ಲಿಸ್ದೆ ಕಣೇ..ಆಗ ಆ ಧನ್ಯತೆಯಿ೦ದ ಬ೦ದ ಕಣ್ಣೀರಿದು..."ಇದಲ್ಲವೇ ಜಗಮೆಚ್ಚೋ,ಹೃದಯ ಕರಗಿಸೋ,ಕಲ್ಲು ಕೂಡ ನೀರಾಗೋ ತಾಯಿ ಮಗುವಿನ ಸ೦ಬ೦ಧ...ಹೀಗಿರಬೇಕಲ್ಲವೇ ಭಾವಗಳ ಅನುಬ೦ಧ?!..ಜನನಕೂ ಮರಣಕೂ ಪ್ರೀತಿಯೇ ಬೇಕು..ಅದಕ್ಕೇ ಹೇಳುವರು ‘ಒಲವೇ ನಮ್ಮ ಬದುಕು’...ಜೀವನಪೂರ್ತಿ ಎರೆವಳು ಅಮ್ಮ,ಹೃದಯದ ಪ್ರೀತಿ..ಇ೦ದಿನಿ೦ದಾದರೂ ನಮಿಸೋಣ ಅವಳಿಗೆ ಬಾರಿ ಬಾರಿ...ಕುಳ್ಳಿರಿಸಿ ನಮ್ಮ ಮನೆಯೊಳಗೆ,ಮನದೊಳಗೆ....ಇರಲಿ ಹೀಗೇ ಜೀವ ಬೆಸುಗೆ.....ಇದು ಎಲ್ಲ ತಾಯ೦ದಿರಿಗೆ ಸಮರ್ಪಣೆ...ಅಮ್ಮ೦ದಿರೇ...!!ಕಳೆವೆವು ನಾವು ನಿಮ್ಮೆಲ್ಲರಾ ವೇದನೆ.....!!!.....



                                                                                                               ‘ಶ್ರೀ’
                                                                                                                ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ