"ದಾರಿ..ತಂಬೂರಿ...ಅಲೆಮಾರಿ..."
ಹೆದ್ದಾರಿಯಾ ಎದೆಯಲ್ಲಿ
ನೆನಪುಗಳಾ ನಡಿಗೆ
ಅಡಿಗಡಿಗೆ ಕಳೆದಿಹವು
ಒಂದೊಂದೇ ಗಳಿಗೆ..
ನಟ್ಟನಡುವೆ ಬಿಳಿಪಟ್ಟಿ
ಅಂತರದ ಓಟಗಳಿಗೆ..
ಬೇಲಿಗೂಟಗಳೆಲ್ಲಾ ಬಂಧಿ
ಬಾಂಧವ್ಯದ ತಂತಿಯಲಿ
ಬಿಸಿಲು ಬೆಸೆದಿರೋ ಹಾಗೆ
ಚಂದ್ರಮನ ತೋಳಲಿ..
ಬಿಂದು ಬಿಂದುವು ಬಂಧು
ಅಖಂಡ ಸೃಷ್ಟಿಯಲಿ...
ಹೆಜ್ಜೆಗುರುತುಗಳೆಲ್ಲ
ಪಳೆಯುಳಿಕೆಗಳಾಗಿಯೂ
ಒಳಗಾಗಿಲ್ಲ ಅಸ್ತಿತ್ತ್ವದ ಹಂಗಿಗೆ..
ಕಳಚಿಹುದು ಅಲ್ಲಲ್ಲಿ
ಹೊರಪದರ;ಆರದಾ ಗಾಯಕ್ಕೆ
ತೇಪೆ ಹಾಕಿದ ಮೇಲೂ
ತಕರಾರು ಎದೆಯೊಳಗೆ..
ದೂರದೂರಿನ ಕಾಲುದಾರಿಗೆ
ನಾನೊಬ್ಬ ದಾರಿಹೋಕ
ಉದುರುತಿಹ ಎಲೆಗಳಿಗೂ
ನನ್ನ ಸೋಕೋ ತವಕ..
ಬೆರಳ ಜೊತೆ ತಂತಿ ಸೇರಿಸಿ
ಹಸಿದ ಉದರದ ಕೂಗ
ಹಾಡಾಗಿಸಿದೆ ತಂಬೂರಿ..
ಎಲ್ಲ ದಾರಿಗೂ ಗಮ್ಯವೊಂದೇ!
ಕವಲುಗಳ ಕಲೆಹಾಕೋ
ನಾ...ಅಲೆಮಾರಿ..
~`ಶ್ರೀ'
ತಲಗೇರಿ
ಹೆದ್ದಾರಿಯಾ ಎದೆಯಲ್ಲಿ
ನೆನಪುಗಳಾ ನಡಿಗೆ
ಅಡಿಗಡಿಗೆ ಕಳೆದಿಹವು
ಒಂದೊಂದೇ ಗಳಿಗೆ..
ನಟ್ಟನಡುವೆ ಬಿಳಿಪಟ್ಟಿ
ಅಂತರದ ಓಟಗಳಿಗೆ..
ಬೇಲಿಗೂಟಗಳೆಲ್ಲಾ ಬಂಧಿ
ಬಾಂಧವ್ಯದ ತಂತಿಯಲಿ
ಬಿಸಿಲು ಬೆಸೆದಿರೋ ಹಾಗೆ
ಚಂದ್ರಮನ ತೋಳಲಿ..
ಬಿಂದು ಬಿಂದುವು ಬಂಧು
ಅಖಂಡ ಸೃಷ್ಟಿಯಲಿ...
ಹೆಜ್ಜೆಗುರುತುಗಳೆಲ್ಲ
ಪಳೆಯುಳಿಕೆಗಳಾಗಿಯೂ
ಒಳಗಾಗಿಲ್ಲ ಅಸ್ತಿತ್ತ್ವದ ಹಂಗಿಗೆ..
ಕಳಚಿಹುದು ಅಲ್ಲಲ್ಲಿ
ಹೊರಪದರ;ಆರದಾ ಗಾಯಕ್ಕೆ
ತೇಪೆ ಹಾಕಿದ ಮೇಲೂ
ತಕರಾರು ಎದೆಯೊಳಗೆ..
ದೂರದೂರಿನ ಕಾಲುದಾರಿಗೆ
ನಾನೊಬ್ಬ ದಾರಿಹೋಕ
ಉದುರುತಿಹ ಎಲೆಗಳಿಗೂ
ನನ್ನ ಸೋಕೋ ತವಕ..
ಬೆರಳ ಜೊತೆ ತಂತಿ ಸೇರಿಸಿ
ಹಸಿದ ಉದರದ ಕೂಗ
ಹಾಡಾಗಿಸಿದೆ ತಂಬೂರಿ..
ಎಲ್ಲ ದಾರಿಗೂ ಗಮ್ಯವೊಂದೇ!
ಕವಲುಗಳ ಕಲೆಹಾಕೋ
ನಾ...ಅಲೆಮಾರಿ..
~`ಶ್ರೀ'
ತಲಗೇರಿ
'ಬಿಂದು ಬಿಂದುವು ಬಂಧು' ನನಗೆ ತುಂಬ ನೆಚ್ಚಿಗೆಯಾದ ಸಾದೃಶ್ಯತೆ.
ಪ್ರತ್ಯುತ್ತರಅಳಿಸಿ