ಶುಕ್ರವಾರ, ಆಗಸ್ಟ್ 16, 2013

       "ಅವನಲ್ಲೂ"...

ಖಾಲಿ ಬಾನಿನ ಒಂಟಿ ಬಾನಾಡಿ
ಹಾರುತಿಹುದು ದೂರ ದಿಗಂತದೆಡೆಗೆ..
ಏಳುಬೀಳಿನ ಮುಗಿಲ ದೂಡಿ
ಕಳೆಯಬಹುದೇ ಗಾಳಿ ತಾನೇ ಬೇಗೆ..

ಬೆರೆತ ಏಕಾಂತಕೆ ಮೌನ ಬೇಕೆ
ಮರೆವ ನಿನ್ನೆಗೆ ಮತ್ತೆ ಶೃಂಗಾರ
ಹಳೆಯ ನೌಕೆಯ ತೇಲು ಯಾನಕೆ
ಹಗಲ ಬೆಳಕಲಿ ಪಂಜು ಬೀಸರ
ರುಜುವಿಹುದು ನನ್ನೆದೆಯ ಪುಟದಿ
ನೀನಿಟ್ಟ ಹೆಜ್ಜೆಗಳಿಗೆ ಅದುವೇ ಸಾಕ್ಷಿ..

ಮುಗಿಲ ಹನಿಗಳ ಏಕತಾನತೆ
ನೀನಿದ್ದ ಪ್ರತಿಕ್ಷಣವು ಹೊಸತು ಪಲುಕು
ನೀ ತೊರೆದ ಎದೆಯ ಅಬ್ಬರದ ಮೊರೆತ
ಕಲ್ಲನ್ನು ಸವೆಸುತಿದೆ ಭರತ ಅನವರತ
ಮಜವಿಹುದು ಆ ಕಡಲ ದಡದಿ
ಅರಳಿಹುದು ಹೂ ದೀರ್ಘ ನೆನಪ ಸೂಸಿ..

ಇರುಳ ಬಾನಲಿ ಹಳೆಯ ಬೇಸರ
ಕಳೆಯಬಂದಿಹ ಹಾಗೇ ಚಂದಿರ..
ಚದುರಿ ಅಲೆದಿಹ ಚುಕ್ಕಿಗಳ ಕರೆದು
ಬಿಡಿಸಬಯಸಿಹ ಅವಳ ಚಿತ್ತಾರ..
ಅವನಲ್ಲೂ ಹುಟ್ಟಿಹುದು ನೆನಪಿನಾ ಮಹಾಪೂರ..

                            ~‘ಶ್ರೀ’
                              ತಲಗೇರಿ

4 ಕಾಮೆಂಟ್‌ಗಳು: