ಗುರುವಾರ, ಏಪ್ರಿಲ್ 11, 2013


       "ಚೆಂದ ಹಂಗಾಮ"..

ನೀ ನನ್ನ ಗುರುತಿನ ಹೆಸರು
ನಾ ಹೇಗೆ ಮರೆಯಲಿ ನಿನ್ನ
ನೀ ನನ್ನ ಉಸಿರಿನ ಉಸಿರು
ನಾ ಹೇಗೆ ತೊರೆಯಲಿ ನಿನ್ನ..

ಎದೆಯಂದು ನಡೆಸಿತ್ತು ಖಾಲಿ ಜೀವನ
ಒಲವಲ್ಲೇ ನೀ ತುಂಬಿದೆ ಈ ಮೈಮನ..
ಸ್ವರವೊಂದು ಮಿಡಿದಾಗ ಬಹುಮೆಲ್ಲನೆ
ಜಾರಿತಲ್ಲೇ ಬರಿ ಏಕಾಂತ ಸುಮ್ಮನೆ..
ನೀನೆಂದೂ ಚೈತ್ರದಾ ಸಂಭ್ರಮ
ನನ್ನಎಲ್ಲ ಕನಸಿನಾ ಚೆಂದ ಹಂಗಾಮ...

ಮಿಂಚೊಂದು ಸುಳಿದಾಗ ತುಸು ಕಂಪನ
ಬಳಿಯಲ್ಲೇ ನೀ ಬಂದಂತೆ ಅನುಮಾನ..
ಹನಿಯೊಂದು ಇಳಿದಾಗ ಮೃದು ತಲ್ಲಣ
ಬಸಿರಲ್ಲೇ ನೀ ಬೆರೆತಂತೆ ಆ ಕ್ಷಣ..
ನೀನೆಂದೂ ಚೈತ್ರದಾ ಸಂಭ್ರಮ
ನನ್ನೆಲ್ಲ ಕನಸಿನಾ ಚೆಂದ ಹಂಗಾಮ..

ಅಳಬೇಕು ನಾನು ಸುಮ್ಮನೆ
ನಿನ್ನ ಬೆರಳು ಸೋಕಲೆಂದು ಮೆಲ್ಲನೆ..
ಬೀಸಿಬಿಡು ತುಸು ತಂಗಾಳಿ
ಸ್ಪರ್ಶ ಪಲುಕು ಸ್ಪಂದಿಸಲಿ ಘಮ್ಮನೆ..

                                    ~‘ಶ್ರೀ’
                                      ತಲಗೆರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ