ಭಾನುವಾರ, ಆಗಸ್ಟ್ 30, 2015

"ಸಂಚಿಕೆ..."

     "ಸಂಚಿಕೆ..."

ಕೆಂಪುರಂಗಿನ ಸಂಗಕೂ
ಚಾಚಿದಾ ಹೆಣದ ರಾಶಿ..
ಬರಲಾರನೇ ಬಾನೆಡೆಗೆ
ಕಂಪುರಾತ್ರಿಯ ಮೃದುಭಾಷಿ..
ಮೇಘಕ್ಕೂ ತಾಡಿಹುದೇ
ತಿಮಿರದಾ ಸಂವೇದನೆ...

ಅಂತರಂಗದ ಅಸಲಿ ಕತೆಗಳಾ
ಹರಿದ ಪುಟಗಳ ಅಕ್ಷರದ ಪಾಡು..
ಕುಂಟುತ್ತ ಎದೆಯೊಳಗೆ ತೊದಲುತಿದೆ
ಅಂಕಣದ ಜೀವಗಳು ಚೆದುರಿದಾ ಹಾಡು..
ತನನಕ್ಕೂ ತಾಡಿಹುದೇ
ತಿಮಿರದಾ ಸಂವೇದನೆ...

ನಡೆದಂತೆ ಋತುಮಾನ,ಬೀದಿಯಲಿ
ದ್ರವವಾಯ್ತು ಬಾನಿನಾ ಕರಿಧೂಳು..
ತುಂಬೀತು ಬೆಳಕು ಪೂರ ಕೋಣೆಯಲಿ
ಅರ್ಧ ತೆರೆದಿಟ್ಟರೂ ಪುಟ್ಟ ಬಾಗಿಲು..
ಬಿಡಿಗಳೊಂದೊಂದನೇ ಎದೆಯೊಳಗೆ ಕೂರಿಸಲು
ಕಾರಣದ ದಾರವು ನೀನೇನೇ..
ಕಂತುಗಳ ಸಂಚಿಕೆಯು ಈ ಬದಲಾವಣೆ...

                                           ~‘ಶ್ರೀ’
                                              ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ