ಶನಿವಾರ, ಸೆಪ್ಟೆಂಬರ್ 29, 2012


       "ಅನುವಾದ"
   ಪುಟ್ಟ ಹಣತೆಯ ಬೆಳಕಿನೊಲುಮೆಯ
   ತುಂಬಿಕೊಂಡಿದೆ ಅರಮನೆ
   ಸಪ್ತಸ್ವರಗಳ ಮಿಡಿತವಿರಲು
   ಕಾದಿಹಳು ಅಭಿಸಾರಿಕೆ ನನ್ನನೇ!

   ಇರುಳ ಮೊರೆತ
   ಸೆಳೆಯುತಿದೆ ಅನವರತ...
   ಮರಳಿ ಅರಳುವ ಭಾವದಿ
   ಬೆರೆಯುತಿದೆ ಸ್ವಪ್ನ ಕನವರಿಕೆ..

   ಸೋಕಿಬಿಡು ನೆನಪೆ
   ಸುಕ್ಕಾದ ಮನಸುಗಳ!
   ಬರಿದೆ ಹೃದಯದ ಜೀವದಿ
   ಬರೆಯಬೇಕು ಸಾಲು ಚಡಪಡಿಕೆ...

   ಕರಗಿಬಿಡು ಬೆಳಕೆ
   ಆಸೆಗಳ ಮುಸುಕಿನೊಳಗೆ
   ಹಚ್ಚಿಬಿಡು ಹಣತೆ
   ಸ್ವಚ್ಛ ಬೆಳಕ ಒಳಗೊಳಗೆ
   ಎದೆಯೊಳಗೆ..
   ನೀ ಆರಿಹೋಗುವ ಮುನ್ನ...
   ನಡೆಯಬೇಕಿದೆ ಇನ್ನು
   ನಿಶೆಯ ಮಸುಕಿನಲಿ
   ಉನ್ಮಾದದಾ ಅನುವಾದ
   ತುಂಬಿಕೊಳ್ಳಲಿ ಮತ್ತೆ
   ನಮ್ಮೊಳಗೆ
   ಕನಸುಗಳಾ ಹೊಸನಾದ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ