ಶನಿವಾರ, ಮಾರ್ಚ್ 26, 2011


ಮಿಡಿದ ಸೆಳೆತ

ಕಲ್ಲು ವೀಣೆ ಮಿಡಿಯುತಿಹುದು
ನಿನ್ನ ಜೀವ ದನಿಯ ಸೆಳೆತಕೆ
ಅಲ್ಲು ಇಲ್ಲು ನಾದವಿರಲು
ಪ್ರೀತಿ ಮನಸಿನ ಕಾಣಿಕೆ

ಎದೆಯ ಒಳಗಿನ ತುಮುಲಗಳನು
ಹೆಕ್ಕಿ ಪೋಣಿಸು ರಾಗಮಾಲಿಕೆ
ಉದುರೋ ಕಣ್ಣಿನ ಹನಿಗಳದಕೆ
ಹವಳದ೦ತೆ ಇರಲಿ ಸನಿಹಕೆ

ಮೌನ ಪರದೆಯ ಮಡಿಕೆಯೊಳಗೆ
ಮಾತ ಛಾಯೆಯು ಕಳೆದುಹೋಗಿದೆ!
ಹಣತೆ ತುದಿಗೆ ಬೆಳಕು ಮೂಡಲು
ಚಲಿಸಬೇಕಿದೆ ತಾನೇ ನೆರಳು!

ಎಲ್ಲೋ ಬಿದ್ದಿಹ ಮನಸಿನೊಳಗು
ಹುಟ್ಟುತಿಹುದು ಅಲೆಯ ನಿಲುವು
ಹೊತ್ತು ಅಲೆಯುವ ಹಾಯಿದೋಣಿಯ
ಕರೆಯಬೇಕಿದೆ ಮರಳ ತೀರವು!

ತ೦ತಿ ಮೀಟಿದ ಸವಿಯ ಕ೦ಪನ
ಬೆರಳು ಸ್ವರಕು ಬಿಗಿಯ ಬ೦ಧನ
ಅ೦ತರ೦ಗದಾ ಕವನದೊಳಗೆ
ಪದವೇ ಆಗಿದೆ ಚೇತನ!!
                        ~‘ಶ್ರೀ’
                           ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ