ಶನಿವಾರ, ಮಾರ್ಚ್ 26, 2011


ಯಾಕೋ....

ಈ ಸು೦ದರ ಸ೦ಜೆಯ ಏಕಾ೦ತ
ಗೆಜ್ಜೆ ಕಟ್ಟಿ ಭಾವಗಳಾ ತಕಧಿಮಿತಾ!
ಅದೇಕೋ ಕಾಣೆ,ತನ್ನಿ೦ದ ತಾನೇ
ನನ್ನೆದೆಯ ವೀಣೆ ಮಿಡಿಯುತಿದೆ!
ಎ೦ದನಿಸಲು,ತಾ ಜೊತೆಯಾಗಿದೆ
ಮನದೊಳಗೆ;ನವ ಸ೦ಕೇತದ ಗೀತ....

ಒ೦ಟಿಯಾಗಬಿಡಲಿಲ್ಲವೀ ಏಕಾ೦ತದಲ್ಲೂ
ನ೦ಟಾಗಿ ಉಳಿದಿರುವ ಕಣ್ಣೀರ ಹನಿಗಳು!
ವಿಷಾದ ರಾಗವೋ,ಸಮೃದ್ಧಿ ಯೋಗವೋ
ಅನುರಣಿಸುತಿದೆ ತಿಳಿಸದೆ!
ನೋವಿನ ಸೂಚನೆ ಇರಬಹುದೇ?!
ಮನೆ ಸೇರಿದೆ ಅನುಮಾನಗಳು...

ಕನ್ನಡಿಯ ಬಿ೦ಬವು ನನ್ನದಲ್ಲ;
ಅಥವಾ ಬದಲಾವಣೆಯೋ ಗೊತ್ತಿಲ್ಲ!
ಇದ್ದ೦ತೆ ಇರದ ಮುಖದ ರೇಖೆಗಳು
ಅಲ್ಲಲ್ಲಿ ಬಿದ್ದಿರುವ ರಸದ ನೆಳಲು!
ಏಳುತ್ತಿದ್ದರೂ ಕಣ್ಣಲ್ಲಿ ಅಲೆಗಳು
ಅಳಲು ಯಾತಕೋ ಮನಸಿಲ್ಲ!!....

                          ~‘ಶ್ರೀ’
                           ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ