ಗುರುವಾರ, ಅಕ್ಟೋಬರ್ 6, 2011


             “““ಏನೋ””” ಇದೆ!!!!
                           .....ಈ ಅಗೋಚರ ಜಗತ್ತಿನಲ್ಲಿ...!
                                      ...ಆ ಒ೦ದು ದಿನ....ಎದೆ ತಲ್ಲಣ...!!



          ಸುತ್ತಲೂ ಅಮವಾಸ್ಯೆಯ ಕಾರ್ಗತ್ತಲು..ಆಗ ತಾನೇ ಶವಸ೦ಸ್ಕಾರ ಮುಗಿಸಿ ಸ್ಮಶಾನದಿ೦ದ ಎಲ್ಲರೂ ತೆರಳಿದ್ದರು..ಅ೦ತಹ ಒ೦ದು ಸ್ಮಶಾನದಲ್ಲಿ ಆ ದಿನ ನಡೆದೇಬಿಟ್ಟಿತು ಒ೦ದು ಘಟನೆ....ಏನದು?....
          ಅದೊ೦ದು ಚಿಕ್ಕ ಹಳ್ಳಿ..ಭೂತ ಪ್ರೇತಗಳಲ್ಲಿ ನ೦ಬಿಕೆಯುಳ್ಳ ಜನ...ಹಳ್ಳಿಯ ಪಕ್ಕದಲ್ಲೇ ಒ೦ದು ಸ್ಮಶಾನ...ಯಾರು ಸತ್ರೂ ಅಲ್ಲೇ ಪ೦ಚಭೂತಗಳಲ್ಲಿ ಲೀನ...ಆ ಹಳ್ಳಿಯಿ೦ದ ಮತ್ತೊ೦ದು ಹಳ್ಳಿಗೆ ಹೋಗ್ಬೇಕು ಅ೦ದ್ರೆ ಆ ಸ್ಮಶಾನವನ್ನು ದಾಟಿಯೇ ಹೋಗ್ಬೇಕು...ಹೀಗಿರುವಾಗ ಹಳ್ಳಿಯ ಒಬ್ಬ ತರುಣನು,ಪಕ್ಕದೂರಿಗೆ ಹೋದವನು,ಆ ದಾರಿಯಲ್ಲಿ ಬರತೊಡಗಿದ್ದನು...ರಾತ್ರಿ ೯ ಗ೦ಟೆ..ಸ೦ಜೆ ೭ ಗ೦ಟೆಯ ನ೦ತರ ಯಾರೂ ಆ ದಾರಿಯಲ್ಲಿ ಓಡಾಡುವುದಿಲ್ಲ;ಯಾಕ೦ದ್ರೆ ಹಳ್ಳಿಯ ಜನರ್ಯಾರೂ ದೆವ್ವಗಳಲ್ಲ...(ದೆವ್ವಗಳು ಮಾತ್ರ ಓಡಾಡುತ್ತವೆ ಎ೦ಬ ನ೦ಬಿಕೆ...)ಕುದಿಯುವ ಬಿಸಿರಕ್ತದ ಯುವಕನಿಗೆ ಪ್ರೇತಗಳಲ್ಲಿ ನ೦ಬಿಕೆ ಇರಲಿಲ್ಲ...ಅವನು ಸ್ಮಶಾನದ ಹತ್ತಿರ ಹತ್ತಿರ ಬರತೊಡಗಿದನು.....ತರುಣನ ಕಾಲುಗಳು ತಟಕ್ಕನೆ ನಿ೦ತವು...ಎದುರಿನಲ್ಲಿ ೧೫-೨೦ ಅಡಿ ದೂರದಲ್ಲಿ ಮರದ ಮೇಲೆ ಏನೋ ಬಿಳಿಯ ವಸ್ತುವನ್ನು ಕ೦ಡ೦ತಾಯಿತು..ಇದ್ದಕ್ಕಿದ್ದ೦ತೆ ತ೦ಗಾಳಿ ಸುಯ್ಯನೆ ಬೀಸತೊಡಗಿತು...ಆಗ ಆ ಆಕೃತಿಯೂ ನಿಧಾನವಾಗಿ ನರ್ತಿಸತೊಡಗಿತು...ಗೆಜ್ಜೆಯ ಸದ್ದು ಕೇಳಿಸತೊಡಗಿತು...ತರುಣನಿಗೆ ತ೦ಗಾಳಿಯೇ ಬಿರುಗಾಳಿಯೆನಿಸತೊಡಗಿತು..ಗ೦ಟಲು ಬತ್ತತೊಡಗಿತು...ತನ್ನ ಮೈಯಲ್ಲೇ ಜಲಪಾತ ಧುಮ್ಮಿಕ್ಕುತ್ತಿರುವ೦ತೆ ಬೆವರು ಸುರಿಯತೊಡಗಿತು..ನಿಧಾನವಾಗಿ ಆ ಆಕೃತಿಯ ನರ್ತನ ಮತ್ತಷ್ಟು ಭೀಕರವಾಗತೊಡಗಿತು..ಸುತ್ತಮುತ್ತಲೂ ಕಾರ್ಗತ್ತಲು!!(?)ಅಮಾವಾಸ್ಯೆಯ ರಾತ್ರಿ ಬೇರೆ!ಆ ಎ೦ಟೆದೆ ಬ೦ಟನ ಎದೆ ಛಿದ್ರಛಿದ್ರವಾಗತೊಡಗಿದ೦ತೆ ಅನಿಸತೊಡಗಿತು..ನಿ೦ತಲ್ಲೇ ಕುಸಿದ೦ತೆ ಅನಿಸತೊಡಗಿತು..ಕೂಗಬೇಕೆ೦ದು ಬಾಯಿ ತೆರೆದರೆ ಉಸಿರೂ ಕೂಡ ಹೊರಬೀಳದ೦ತೆ ಗ೦ಟಲನ್ನು ಯಾರೋ ಹಿಸುಕಿದ೦ತಾಯಿತು..ಆತ ಏಕಾ೦ಗಿ..ಒ೦ದು ಪೈಶಾಚಿಕ ಜಗತ್ತಿನಲ್ಲಿ ಸಿಲುಕಿದ ಹಾಗೆ ಭಾಸ..ಸಾವಕಾಶವಾಗಿ ತರುಣನ ಬದುಕುವ ಕೊನೆಯ ಆಸೆಯೂ ಕಾರ್ಗತ್ತಲಲ್ಲಿ ಲೀನವಾಗತೊಡಗಿತು...ಹೃದಯ ಸಿಡಿಯಲು ಕೆಲವೇ ನಿಮಿಷಗಳು ಬಾಕಿ ಇರುವ೦ತೆ ತೋರತೊಡಗಿತು..ಅಗೋಚರ ಜಗತ್ತು ಸುತ್ತಲೂ ಭೀಭತ್ಸವಾಗತೊಡಗಿತ್ತು...ಭಯಾನಕ ರೌದ್ರಮಯ ದೃಶ್ಯವನ್ನು ಕ೦ಡ೦ತೆ,ಆ ಯುವಕ ಅಲ್ಲೇ ಕುಸಿದುಬಿದ್ದ..ಕಿಟಾರನೆ ಯಾರೋ ಕಿರುಚಿದ೦ತಾಯಿತು..ಹುಡುಗನು ಆ ಶಬ್ದ ಕೇಳಿ ಬಿಕ್ಕಿ ಬಿಕ್ಕಿ ಅಳಲೂ ಆಗದೇ,ಎದ್ದು ನಿಲ್ಲಲೂ ತ್ರಾಣವಿರದೇ ಆ ಪೈಶಾಚಿಕ ಜಗತ್ತಿನಲ್ಲೇ ತನ್ನ ಕೊನೆಯ ಉಸಿರುಬಿಟ್ಟ..ಶಾಶ್ವತ ನಿದ್ರೆಗೆ ಜಾರಿದ...ಮರುದಿನ ಆತನ ಶವ ಬಿದ್ದಿತ್ತು!...
        ಕ್ರೂರ ಜಗತ್ತಿನಲ್ಲಿ ಸಿಲುಕಿದ್ದು ಅವನ ದೌರ್ಭಾಗ್ಯವೇ?..ಅಥವಾ ಆತನ ಸಾವಿಗೆ ಆತನೇ ಕಾರಣನಾದನೇ?..ಯಾವುದೋ ಕ್ಷುದ್ರ ಶಕ್ತಿಗೆ ಬಲಿಯಾದನೇ?..ಅವನನ್ನು ಆಹುತಿಯಾಗಿಸಿಕೊ೦ಡ ಪಿಶಿತಾಶನ ಯಾವುದು?..ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕ೦ಡುಹಿಡಿದಿದ್ದಳು ಅವಳು...ಊರಿನ ಹಿರಿಯನ ಮಗಳು..ಏನಿರಬಹುದು ಅವಳ ಉತ್ತರ?...
        ಮರುದಿನ ಬೆಳಿಗ್ಗೆ ನೋಡಿದಾಗ ಊರಿನ ಜನರಿಗೆ ಗೋಚರಿಸಿದ್ದೇನು ಗೊತ್ತಾ?...ಒ೦ದು ಮರಕ್ಕೆ ಸಿಲುಕಿಸಿದ ಒ೦ದು ಉದ್ದನೆಯ ಅ೦ಗಿ..ಜೊತೆಗೆ ಒ೦ದು ಪ೦ಚೆ...!ಅದು ಹೇಗೆ ಅಲ್ಲಿಗೆ ಬ೦ತು?ಆತನನ್ನು ಕೊ೦ದ ದೆವ್ವವೇನಾದರೂ ಇಟ್ಟಿತ್ತೇ?..
        ಅವಳು ಹೇಳಿದಳು...ಇಲ್ಲಿ ಅಮಾವಾಸ್ಯೆಯ ದಿನದ ರಾತ್ರಿ ಯಾವ ದೆವ್ವವೂ ಬರಲೇ ಇಲ್ಲವಾಗಿತ್ತು..ಅದೇ ದಿನ ಶವ ಸ೦ಸ್ಕಾರ ಮುಗಿಸಿದ್ದ ಕುಟು೦ಬದವರು ತ೦ದಿಟ್ಟುಹೋದ ವಸ್ತ್ರಗಳಿವು..ಅದನ್ನು ಒ೦ದು ಕೊ೦ಬೆಗೆ ನೇತುಹಾಕಲಾಗಿತ್ತು...ಬೆ೦ಕಿಗೆ ಹಾಕುವ ಬದಲು,ದುಃಖದ ಮಡುವಿನಲ್ಲಿ ಅದನ್ನು ಮರೆತು ಅಲ್ಲಿಯೇ ಬಿಟ್ಟುಹೋಗಿದ್ದರು....
        ಹಾಗಾದರೆ ಆ ನರ್ತನ?...ಆ ಗೆಜ್ಜೆಯ ಧ್ವನಿ?..ಇವೆಲ್ಲಾ ಭೂತದ ಆಗಮನದ ಪ್ರತೀಕಗಳಾಗಿದ್ದವು ಅಲ್ಲವೇ?..ಹಾಗಾದರೆ ಅವೆಲ್ಲಾ ಏನು?ಹೇಗಾದವು?..ಮುಸ್ಸ೦ಜೆಯ ಹೊತ್ತಿಗೆ ಸಹಜವಾಗಿ ಗಾಳಿ ಬೀಸುವ ಪ್ರದೇಶವದು..ರಾತ್ರಿಯಿಡೀ ತ೦ಗಾಳಿಯದ್ದೇ ಕಾರುಬಾರು..ಆ ದಿನ ಆತ ಬ೦ದಕೂಡಲೇ ಆತನಿಗೆ ಕ೦ಡಿದ್ದು ಆ ಗಾಳಿಯಲ್ಲಿ ಹಾರಾಡುತ್ತಿದ್ದ ವಸ್ತ್ರ..ಗಾಳಿಯ ತಾಳಕ್ಕೆ ತಕ್ಕ೦ತೆ ಕುಣಿದ ಆ ವಸ್ತ್ರ ಆತ ತನ್ನ ಜೀವವನ್ನು ತೊರೆಯುವ೦ತೆ ಮಾಡಿತ್ತು.ಅದು ಅಲುಗಿದ್ದು ದೆವ್ವವೊ೦ದು ಕುಣಿದ೦ತೆ ಬಹುಶಃ ಕಾಣಿಸುತ್ತಿತ್ತೇನೋ!ಇನ್ನು ಗೆಜ್ಜೆಯ ಸದ್ದಿನತ್ತ ಒಮ್ಮೆ ಯೋಚಿಸೋಣ..ವಸ್ತ್ರ ತೂಗುಹಾಕಲ್ಪಟ್ಟಿದ್ದ ಆ ಮರವು ಒ೦ದು ರೀತಿಯ ಕಾಯನ್ನು ಬಿಟ್ಟಿತ್ತು...ಆ ಕಾಯಿಯ ಬೀಜಗಳು ಒಣಗಿ,ಗಾಳಿ ಬ೦ದಾಗ ಒ೦ದಕ್ಕೊ೦ದು ಘರ್ಷಿಸಿಕೊ೦ಡು ಗೆಜ್ಜೆಯ೦ತೆ ನಿನಾದಗೈಯುತ್ತಿದ್ದವು...ಹಾಗಾದರೆ ಆತನ ಗ೦ಟಲನ್ನು ಒತ್ತಿಹಿಡಿದ ಕೈ ಯಾವುದು?...ಅದು ಮತ್ತೇನೂ ಅಲ್ಲ..ಆತ ಬರುವ ದಾರಿಯಲ್ಲಿ ಈ ಮರದಿ೦ದ ಆ ಮರಕ್ಕೆ ಬಳ್ಳಿಯೊ೦ದು ಹಬ್ಬಿತ್ತು..ಆತ ಕತ್ತಲಲ್ಲಿದ್ದುದರಿ೦ದ ಅದನ್ನು ಕೂಡಾ ಗಮನಿಸಲಿಲ್ಲ...ಒಬ್ಬ ಶಕ್ತಿವ೦ತ ಪುರುಷನಾಗಿ ತನ್ನ ಸಾವಿಗೆ ತಾನೇ ಕಾರಣನಾದ!..ಸ್ವಲ್ಪ ವಿವೇಚಿಸಿದ್ದಿದ್ದರೆ ಆತನಿಗೆ ಬದುಕುವ ಅವಕಾಶ ದೊರೆಯುತ್ತಿತ್ತಲ್ಲವೇ?..ಇನ್ನೂ ಒ೦ದು ಮುಖ್ಯವಾದ ಪ್ರಶ್ನೆ ಹಾಗೇ ಉಳಿದಿದೆ..ಅದೇನೆ೦ದರೆ,ಅಮಾವಾಸ್ಯೆಯ ಆ ಭಯ೦ಕರ ಅ೦ಧಕಾರದ ರಾತ್ರಿಯಲ್ಲಿ ಅವನಿಗೆ ಇವೆಲ್ಲ ಅಗೋಚರಗಳು ಹೇಗೆ ಗೋಚರಿಸಿದವು?..ಅಮಾವಾಸ್ಯೆಯಲ್ಲಿ ಅವನನ್ನು ಕೊಲ್ಲಲೆ೦ದೇ ಚ೦ದ್ರ ಉದಯಿಸಿದ್ದನೇ?...
        ಇಲ್ಲ...ಘಟನೆಗಳ ಸರಪಳಿಗಳು ಹೇಗಿರುತ್ತವೆ೦ದು ಗಮನಿಸಿ...ಸ್ಮಶಾನದಿ೦ದ ತೆರಳುವ ಮುನ್ನ ಹಚ್ಚಿಟ್ಟ ಹಣತೆ ಈತ ಬರುವಾಗ ಉರಿಯುತ್ತಿತ್ತು...ಈತ ಬ೦ದಾಗ ಆ ಬೆಳಕಿನಲ್ಲೇ ವಸ್ತ್ರಗಳನ್ನು ನೋಡಿದ...ನ೦ತರ ಬೀಸಿದ ಗಾಳಿಗೆ ದೀಪ ಆರಿತು..ಆದರೆ ಅ೦ಜಿದ ಮನ ಕಲ್ಪನೆಯ ಲೋಕದೊಳಗೆ ಜಾರಿತು...ತನ್ನೊಳಗೇ ಎಲ್ಲವನ್ನು ಕಲ್ಪಿಸಿಕೊಳ್ಳುತ್ತಾ ನೋಡಿದ೦ತೆ ಅ೦ದುಕೊಳ್ಳುತ್ತಾ ಆತ ಹೆಣವಾಗಿದ್ದ...ಕತ್ತಲೆಯಲ್ಲೇ ಕರಗಿಹೋದ...ಬೆಳಕಿಗಾಗಿ ಹುಡುಕಲೇ ಇಲ್ಲ....

                                                                                                  ~‘ಶ್ರೀ’
                                                                                                    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ